ಗಂಧವತಿ

ರಶ್ಮಿ ರಥವನೇರಿ ಬರುವ
ಸೂರ್ಯ ನನ್ನಯ ಕಾಂತಿಯು,
ಬ್ರಹ್ಮ ಬೆಸೆದ ಗಂಟ ನಂಟಿನಿನಿಯ
ಜೀವನ ಸಂಗಾತಿಯು |

ಇರುಳ ಬೇಗುದಿಯ ಕಳೆವ
ಮೂಡಲೆಡೆಗೆ ಚಿತ್ತವು.
ಅಡಿಯಿಟ್ಟನೆಲೆಯ ಹದುಳತನವೆ
ಬಾಳ ಮಧುಬನ ಚೈತ್ರವು.

ಅತ್ತ ಇತ್ತ ಸುತ್ತ ಜೋಕೆಯಿಂದ
ಕಿರಣದೆಡೆಗೆ ಯಾನವು,
ಸಂಕರಗಳ ಶೂಲ ಜಾಲ ಜಾಲದಲ್ಲೂ
ನಗುವಿನೆಡೆಗೆ ಧ್ಯಾನವು,

ಅರವಿಂದನುರಿಯ ಬಿಂಕು ಮಾತಿಗೂ
ಒಲವ ಬೆಸೆಸೊ ಭೂಮಿಕೆ,
ಶಶಿಯ ತಿಂಗಳ ತಂಬೆಳಕಿನಂಗಳ
ಸುರತಿ ಸುಖಕೆ ಪೀಠಿಕೆ,

ಮಳೆ ತವರ ಮೌನಕೆ ಪ್ರಕೃತಿ ತಾಪಕೆ
ಜೀವವಾಗುತೆ ತಲ್ಲಣ,
ಮಾನಧನನ ಹಗೆಯ ಬಗೆ ಬಗೆ ಬೆಂಕಿಗೆ
ಚಿತೆಗೇರುತೆ ಹೆಣ್ಣ ಹೆಣ,

ಮಣ್ಣನೆತ್ತರು ಬಸಿದಿತ್ತು ಹೆತ್ತರು
ಹೊನ್ನ ಜಠರವೆ ನಾಶವು,
ಕವಿದ ಆಸೆಯ ಮಾಯಾ ಛಾಯೆಯು
ಎನ್ನ ಕುಲಕೆ ಮೃತ್ಯುವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಧನ್ಯತೆಯ ಕನಸಿಗೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys